ಹಿಮ ಕುಸಿತ-7 ಮಂದಿ ಪ್ರವಾಸಿಗರ ಸಾವು

ಮಂಗಳೂರು: ಸಿಕ್ಕಿಂನ ನಾಥು ಲಾ ಮೌಂಟೇನ್ ಪಾಸ್ ಬಳಿ ಏ.4ರಂದು ಸಂಭವಿಸಿದ ಹಿಮ ಕುಸಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು ಹಲವರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ 12:20ರ ಸುಮಾರಿಗೆ ಹಿಮ ಕುಸಿತವಾಗಿದೆ.

ನಾಥು ಲಾ ಪಾಸ್ ಭಾರತ-ಚೀನಾದ ಗಡಿಭಾಗದಲ್ಲಿದ್ದು ಅದರ ರುದ್ರ ರಮಣೀಯ ಸೌಂದರ್ಯದಿಂದಾಗಿ ಪ್ರಮುಖ ಪ್ರವಾಸಿ ತಾಣವಾಗಿದೆ. ದೇಶ ವಿದೇಶದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಘಟನೆಯಲ್ಲಿ ಸುಮಾರು 22 ಮಂದಿಯನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ರಕ್ಷಣಾಕಾರ್ಯ ಮುಂದುವರಿದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here