ಎಚ್ಚರ ಜನಪ್ರತಿನಿಧಿಗಳೇ……… ಜನರು ಜಾಗೃತರಾಗಿದ್ದಾರೆ

ಮಂಗಳೂರು: ಅಚ್ಚರಿ ಎನ್ನುವಂತೆ ಕಳೆದ ರಾತ್ರಿ ಮಂಗಳೂರಿನ ಬಿಜೆಪಿ ಮಹಿಳಾ ಕಾರ್ಪೊರೇಟರ್ ಓರ್ವರಿಗೆ ಸ್ಥಳೀಯ ಜನರು ಮುತ್ತಿಗೆ ಹಾಕಿದ್ದಾರೆ.

ತಮ್ಮ ಮನೆ ಮಂದಿಯೊಂದಿಗೆ ಬಂದ ಮಹಿಳೆಯರು ಕಾರ್ಪೊರೇಟರ್ ರಜನಿ ಕೋಟ್ಯಾನ್ ಅವರಿಗೆ ಮುತ್ತಿಗೆ ಹಾಕಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಕದಲಲೂ ಬಿಡದೆ ಜನಪ್ರತಿನಿಧಿಗಳ ನಿರ್ಲಕ್ಷ, ಬೇಜವಾಬ್ದಾರಿ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು. ದೇರೆಬೈಲ್ ಕೊಂಚಾಡಿಯ ಮೂರನೇ ಅಡ್ಡರಸ್ತೆಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಳಪೆ ಕಾಂಕ್ರೀಟ್ ಕಾಮಗಾರಿ ಮಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಪೊರೇಟರ್ ರಜನಿ ಅವರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಕಳಪೆ ಕಾಮಗಾರಿ ಬಗ್ಗೆ ಶಾಸಕ ಭರತ್ ಶೆಟ್ಟಿ ಮತ್ತು ಕಾರ್ಪೊರೇಟರ್ ರಜನಿ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನೀವಿಬ್ಬರೂ ಇಲ್ಲಿಗೆ ಬನ್ನಿ ನಿಮಗೆ ಇಲ್ಲಿನ ಸಮಸ್ಯೆಯನ್ನು ತೋರಿಸುವುದಾಗಿ ಹೇಳಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆದ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ ಬಳಿಕ ಮುತ್ತಿಗೆ ಸಡಿಲಿಸಿ ಮಹಿಳೆಯರು ಹಿಂತಿರುಗಿದರು.

LEAVE A REPLY

Please enter your comment!
Please enter your name here