ತಂದೆಯ ವಿರುದ್ಧ ಅವಮಾನಕಾರಿ ಹೇಳಿಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ವರುಣ್ ಗಾಂಧಿ

ಮಂಗಳೂರು( ಪಿಲಿಬಿತ್ ) : ತಂದೆ ಸಂಜಯ್ ಗಾಂಧಿ ಬಗ್ಗೆ ಟ್ವಿಟರ್ ನಲ್ಲಿ ಮಾರ್ಚ್ 29ರಂದು ಅವಮಾನಕಾರಿಯಾಗಿ ಪೋಸ್ಟ್ ಮಾಡಿದ್ದ ವಾರಣಾಸಿಯ ಬುಜ್ಜಿ ನಿವಾಸಿ ವಿವೇಕ್ ಪಾಂಡೆ ವಿರುದ್ಧ ವರುಣ್ ಗಾಂಧಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಪಿಲಿಬಿತ್ ಕೋರ್ಟಿಗೆ ಮೂವರು ನ್ಯಾಯವಾದಿಗಳೊಂದಿಗೆ ಆಗಮಿಸಿದ ಸಂಸದ ವರುಣ್, ಅಡಿಷನಲ್ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಅಭಿನವ್ ಅವರಿದ್ದ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದಾರೆ. ವರುಣ್ ಗಾಂಧಿ ಹೇಳಿಕೆ ಪಡೆದಿರುವ ಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 25ಕ್ಕೆ ನಿಗದಿಪಡಿಸಿದೆ.

LEAVE A REPLY

Please enter your comment!
Please enter your name here