ಸಂಚಾರ ನಿಯಮ ಉಲ್ಲಂಘನೆ – ಪ್ರಧಾನಿ ವಿರುದ್ಧ ದೂರು

ಮಂಗಳೂರು (ಕೇರಳ): ರೋಡ್ ಶೋ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ನೀಡಲಾಗಿದೆ. ಬಿಜೆಪಿ ಮತ್ತು ಮೋಟಾರ್ ವಾಹನ ಇಲಾಖೆಗೆ ದೂರು ನೀಡಿರುವ ತಿರುವಿಲ್ವಮಲ ನಿವಾಸಿ ಜಯಕೃಷ್ಣನ್ ಕಾನೂನು ಉಲ್ಲಂಘಿಸಿರುವ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಚಾಲಕನಿಗೆ ಕಾರು ಚಾಲನೆ ಮಾಡಲು ತೊಂದರೆಯಾಗುವ ರೀತಿಯಲ್ಲಿ ಗಾಜಿನ ಮೇಲೆ ಹೂ ಹಾಕಲಾಗಿದೆ. ಮಾತ್ರವಲ್ಲದೆ, ಕಾರಿನ ಡೋರ್ ತೆರೆದು ನೇತಾಡಿ ಪ್ರಧಾನಿ ಯಾತ್ರೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸಮಾಜಕ್ಕೆ ಮನವರಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ದೂರುದಾರ ಒತ್ತಾಯಿಸಿದ್ದಾರೆ. ಕೇರಳೀಯ ವೇಷಭೂಷಣ ಧರಿಸಿದ ಮೋದಿ ಮೊದಲು ಕಾಲ್ನಡಿಗೆಯಲ್ಲಿ ನಂತರ ತಮ್ಮ ಕಾರಿನ ಡೋರ್‌ ತೆರೆದು ಫುಟ್ ಬೋರ್ಡ್ ಮೇಲೆ  ನೇತಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ಜನರತ್ತ ಕೈಬೀಸಿದ್ದಾರೆ. ತಿರುವನಂತಪುರದಲ್ಲೂ ಇದೇ ರೀತಿ ಪ್ರಯಾಣಿಸಿದ್ದರು ಎಂದು ದೂರುದಾರರು ಹೇಳಿದ್ದಾರೆ.

LEAVE A REPLY

Please enter your comment!
Please enter your name here