ಕುಡಿದು ಬಂದು ಮತ್ತೇರಿ ಆಪರೇಶನ್‌ ಥಿಯೇಟರ್‌ನಲ್ಲಿ ಕುಸಿದು ಬಿದ್ದ ವೈದ್ಯ

ಮಂಗಳೂರು: ವೈದ್ಯನೊಬ್ಬ ಕುಡಿದ ಮತ್ತಿನಲ್ಲಿ ಆಪರೇಶನ್‌ ಥಿಯೇಟರ್‌ಗೆ ಬಂದು ಬೆಡ್‌ ಮೇಲೆ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕಳಸ ಸರಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಶನ್‌ ಕ್ಯಾಂಪ್‌ ಮಾಡಲಾಗಿದ್ದು 10ಕ್ಕೂ ಹೆಚ್ಚು ಮಹಿಳೆಯರು ಬೆಳಿಗ್ಗೆ 8 ಗಂಟೆಯಿಂದ ವೈದ್ಯರಿಗಾಗಿ ಕಾಯುತ್ತಿದ್ದರು. ಆದರೆ ಕಳಸ ಸರಕಾರಿ ಆಸ್ಪತ್ರೆಯ ವೈದ್ಯ ಬಾಲಕೃಷ್ಣ ಎಂಬವರು ಮದ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಕುಡಿದು ಟೈಟ್‌ ಆಗಿ ಮತ್ತಿನಲ್ಲಿ ಆಪರೇಶನ್‌ ಥಿಯೇಟರ್ ಗೆ ಬಂದ ವೈದ್ಯ ಅಲ್ಲಿಯೇ ಬೆಡ್‌ ಮೇಲೆ ಕುಸಿದು ಬಿದ್ದಿದ್ದಾನೆ. ಇನ್ನು ಆಪರೇಶನ್‌ಗೆಂದು ಬಂದು ಅನಸ್ತೇಷಿಯಾ ಪಡೆದು ಮಲಗಿದ್ದ ಮಹಿಳೆಯ ಸಂಬಂಧಿಕರು ವೈದ್ಯರ ಅವತಾರ ನೋಡಿ ಗರಂ ಆಗಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ವೈದ್ಯರಿಗೆ ಶುಗರ್‌ ಕಡಿಮೆಯಾಗಿ, ಬಿಪಿ ಏರಿಕೆಯಾಗಿದೆ ಎಂದೆಲ್ಲ ಸುಳ್ಳು ಹೇಳಿ ಅಲ್ಲಿಂದ ವೈದ್ಯರನ್ನು ಕೊಪ್ಪ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ. ಜನರ ಆಕ್ರೋಶ ವ್ಯಕ್ತಪಡಿಸಲು ತೊಡಗಿದಂತೆ ಬೇರೆ ವೈದ್ಯರನ್ನು ಕರೆಸಿ ಆಪರೇಶನ್‌ ಮಾಡಿಸಲು ಸಿದ್ದತೆ ನಡೆಸಲಾಗಿದೆ. “ವೈದ್ಯೋ ನಾರಾಯಣ ಹರಿ” ಎನ್ನಲಾಗುತ್ತದೆ. ಇಂತಹ ಬೇಜವಾಬ್ದಾರಿ ವೈದ್ಯರನ್ನು ಎನನ್ನಬೇಕು? ತೀರ್ಮಾನ ನಿಮಗೆ ಬಿಟ್ಟಿದ್ದು.

LEAVE A REPLY

Please enter your comment!
Please enter your name here