ಆದಿಪುರುಷ್‌ ಪ್ರದರ್ಶನ ವೇಳೆ ಹನುಮನಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತ ವ್ಯಕ್ತಿಗೆ ಥಳಿತ

ಮಂಗಳೂರು: ಆದಿಪುರುಷ್ ಚಿತ್ರ ಪ್ರದರ್ಶನದ ವೇಳೆ ಆಂಜನೇಯನಿಗೆ ಮೀಸಲಿರಿಸಿದ್ದ ಸೀಟಿನಲ್ಲಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಗುಂಪೊಂದು ತೀವ್ರವಾಗಿ ಥಳಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ರಾಮಾಯಣ ಆಧರಿಸಿದ ಕಥೆಯನ್ನು ಹೊಂದಿರುವ ಆದಿಪುರುಷ್ ಚಿತ್ರ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳಲ್ಲಿ ರಾಮ ಭಕ್ತ ಹನುಮನಿಗೆ ಆಸನವೊಂದನ್ನು ಮೀಸಲಿರಿಸುವಂತೆ ಚಿತ್ರ ನಿರ್ದೇಶಕ ಓಂ ರಾವುತ್ ಅವರು ಕೋರಿದ್ದರು. ಅದರಂತೆ ಥಿಯೇಟರ್ ಮಾಲೀಕರು ಒಂದು ಆಸನವನ್ನು ಆಂಜನೇಯನಿಗೆ ಮೀಸಲಿರಿಸಿದ್ದಾರೆ.
ಅದರಂತೆ ತೆಲಂಗಾಣದ ಹೈದರಾಬಾದ್‌ ನ ಭ್ರಮರಾಂಭ ಥಿಯೇಟರ್ ನಲ್ಲಿ ಒಂದು ಆಸನವನ್ನು ಕಾಯ್ದಿರಿಸಲಾಗಿತ್ತು. ಖಾಲಿ ಆಸನದಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದು, ಚಿತ್ರ ವೀಕ್ಷಿಸಲು ಬಂದವರಲ್ಲಿ ಕೆಲವರು ವ್ಯಕ್ತಿಯನ್ನು ಪ್ರಶ್ನಿಸಿ ಥಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಆದಿಪುರುಷ್ ಚಿತ್ರದಲ್ಲಿ ನಟ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನನ್ ಹಾಗೂ ರಾವಣ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here