ಕಣ್ಣಿಗೆ ಮೆಣಸಿನ ಹುಡಿ ಎರಚಿ ಸುಲಿಗೆ – ಇಬ್ಬರ ಬಂಧನ

ಮಂಗಳೂರು: ಯುವಕನೋರ್ವನಿಂದ ಚಿನ್ನದ ಸರ ಮತ್ತು ಮೊಬೈಲ್ ಫೋನ್ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರ್ ಪೊಲೀಸರು ಓರ್ವ ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬೆಂಗ್ರೆ ಪೊಲೀಸರು ಬಂಧಿಸಿದ್ದಾರೆ.

ಬೆಂಗ್ರೆ ನಿವಾಸಿ ನಿಹಾಲ್ ವೈ ಸುವರ್ಣ 19 ಮತ್ತು ಅಪ್ರಾಪ್ತ ವಯಸ್ಸಿನ ಬಾಲಕ ಬಂಧಿತರು. ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ನಿಹಾಲ್ ಮತ್ತು ಸುಲಿಗೆಗೆ ಒಳಗಾದ ಯುವಕ ಪರಸ್ಪರ ಪರಿಚಿತರು. ಜೂನ್ 16 ರಂದು ಆರೋಪಿಗಳು ಸಂತ್ರಸ್ತನನ್ನು ಬೈಕಂಪಾಡಿ ಬಳಿಯ ರೈಲ್ವೆ ಹಳಿ ಸಮೀಪ ಕರೆದು, ಕಣ್ಣಿಗೆ ಮೆಣಸಿನ ಪುಡಿ ಎರಚಿ ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ದೋಚಿದ್ದರು. ಬಂಧಿತರಿಂದ ಚಿನ್ನದ ಸರ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here