ಹಾಡಹಗಲೇ ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ – ಆರೋಪಿ ಬಂಧನ

ಮಂಗಳೂರು(ಮುಂಬೈ): ಚಲಿಸುತ್ತಿದ್ದ ಆಟೋದಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಕತ್ತು ಸೀಳಿ ಕೊಲೆಗೈದು‌ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಸಕಿನಾಕಾ ಪ್ರದೇಶದ‌ ಖೈರಾನಿ ರಸ್ತೆಯಲ್ಲಿ ಸೋಮವಾರ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯ ಮಧ್ಯೆ ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ವ್ಯಕ್ತಿ ತನ್ನ ಜತೆಯಲ್ಲಿದ್ದ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಕೊಲೆಗೈದಿದ್ದಾನೆ. ಕೊಲೆಗೈದ ಬಳಿಕ ಆಟೋದಿಂದ ಜಿಗಿದು ಅಪರಾಧ ನಡೆದ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಸ್ವಲ್ಪ ದೂರದಲ್ಲೇ ಇದ್ದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಪಂಚಶಿಲಾ ಅಶೋಕ್ ಜಾಮ್ದಾರ್ (30) ಕೊಲೆಯಾದ ಮಹಿಳೆ. ಈಕೆ ಮುಂಬೈನ ಸಕಿನಾಕಾದಲ್ಲಿರುವ ಚಂಡಿವಾಲಿ ಪ್ರದೇಶದ ಸಂಘರ್ಷನಗರ ನಿವಾಸಿ. ಆದರೆ ಆರೋಪಿಯ ವಿವರ ತಿಳಿದುಬಂದಿಲ್ಲ. ಹತ್ಯೆಗೆ ಕಾರಣವೂ ಗೊತ್ತಾಗಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here