ಮಂಗಳೂರು-ಕೈಬರ್‌ ಪಾಸ್‌ಲೇನ್‌ ನಲ್ಲಿ ಗುಡ್ಡ ಕುಸಿತ

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿದಿದೆ. ಇದರ ಪರಿಣಾಮವಾಗಿ ಮಂಗಳೂರು ನಗರದ ಪಿ ವಿ ಎಸ್ ವೃತ್ತದಿಂದ ಬಿಜೆಪಿ ಕಚೇರಿ ಮುಂಭಾಗವಾಗಿ ಹಂಪನ ಕಟ್ಟೆಗೆ ಬರುವ ಕೈಬರ್ ಪಾಸ್ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಗುಡ್ಡ ಕುಸಿತ ಮೇಲ್ಭಾಗದಲ್ಲಿ ಕೋರ್ಟ್‌ ಆವರಣ ಮತ್ತು ರಸ್ತೆ ಇದ್ದು, ನೂರಾರು ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಈ ಭಾಗದಲ್ಲಿ ಭೂಕುಸಿತ  ಉಂಟಾದ ಕಾರಣ ಸಂಚಾರಕ್ಕೆ ಅಲ್ಪ ಪ್ರಮಾಣದಲ್ಲಿ ತೊಂದರೆ ಆಗಿದೆ. ಮತ್ತಷ್ಟು ಭೂಕುಸಿತ ಉಂಟಾದಲ್ಲಿ ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಆತಂಕ ಎದುರಾಗಿದೆ.

LEAVE A REPLY

Please enter your comment!
Please enter your name here