ತೆಲಂಗಾಣದಲ್ಲಿ ಪ್ರವಾಹ – ಮರವೇರಿ ಕುಳಿತು ಜೀವ ರಕ್ಷಿಸಿ ಕೊಂಡ ವ್ಯಕ್ತಿ

ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಈ ನಡುವೆ ವ್ಯಕ್ತಿಯೊಬ್ಬ ಮರದ ಮೇಲೆ ಗಂಟೆಗಟ್ಟಲೆ ಕುಳಿತು ಜೀವ ಉಳಿಸಿಕೊಂಡಿರುವ ವೀಡಿಯೊವೊಂದು ಹೊರ ಬಂದಿದೆ.

ಜಲಗಾಮ ನಗರದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸುತ್ತಲೂ ಪ್ರವಾಹದ ನೀರು ತುಂಬಿ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಈ ವೇಳೆ ಕೆಲ ಮನೆಯವರು ತಮ್ಮ ಜೀವ ಉಳಿಸಿಕೊಳ್ಲಲು ಮನೆಯ ಟಾರಸಿ ಮೇಲೆ ಹತ್ತಿ ನಿಂತಿದ್ದಾರೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮರ ಏರಿದ್ದಾನೆ. ಆದರೆ ಪ್ರವಾಹದ ನೀರಿನ ಪ್ರಮಾಣ ಹೆಚ್ಚಾಗಿತ್ತು. ಈ ವೇಳೆ ಮರವೇರಿದ ವ್ಯಕ್ತಿಯನ್ನು ಸುಮಾರು 2-3 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ಬಳಿಕ ರಕ್ಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here