ಪಾನಮತ್ತನ ಕೃತ್ಯಕ್ಕೆ ನಡುಬೀದಿಯಲ್ಲಿ ಕಣ್ಣೀರಿಟ್ಟ ಯುವತಿ

ಮಂಗಳೂರು (ತೆಲಂಗಾಣ): ಪಾನಮತ್ತನೊಬ್ಬ ಮದ್ಯದ ಅಮಲಿನಲ್ಲಿ ತನ್ನ ತಾಯಿಯೆದುರೇ ಯುವತಿಯನ್ನು ನಡುರಸ್ತೆಯಲ್ಲೆ ಬೆತ್ತಲೆಯಾಗಿಸಿದ ಅಮಾನವೀಯ ಘಟನೆ ತೆಲಂಗಾಣದ ಬಾಲಾಜಿನಗರದಲ್ಲಿ ಆ.6ರ ರಾತ್ರಿ ನಡೆದಿದೆ.

ಪಾನಮತ್ತನ ಅನುಚಿತ ವರ್ತನೆಯಿಂದ 28 ವರ್ಷದ ಯುವತಿ 15 ನಿಮಿಷ ಕಾಲ ನಡುರಸ್ತೆಯಲ್ಲೇ ವಿವಸ್ತ್ರಳಾಗಿ ಅವಮಾನದಿಂದ ಕಣ್ಣೀರಿಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೆದ್ದ ಮಾರಯ್ಯನನ್ನು ಬಂಧಿಸಿದ್ದಾರೆ. ಜವಾಹರನಗರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕುಡಿದ ಅಮಲಿನಲ್ಲಿ ವ್ಯಕ್ತಿ ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಹರಿದು ಹಾಕಿ ಅಮಾನವೀಯವಾಗಿ ವರ್ತಿಸಿದ್ದಾನೆ.

ಆರೋಪಿ ಪೆದ್ದ ಮಾರಯ್ಯ ಎಂಬ ವ್ಯಕ್ತಿ ಜವಾಹರನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಕುಡಿತಕ್ಕೆ ದಾಸನಾಗಿರುವ ಈತ ಭಾನುವಾರ ರಾತ್ರಿ 8:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಬಾಲಾಜಿನಗರ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಥಳೀಯ ಯುವತಿಯೊಬ್ಬಳು ಅಂಗಡಿಯಿಂದ ಅದೇ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದಳು. ಆಕೆಯನ್ನು ನೋಡಿದ ಮಾರಯ್ಯ ಯುವತಿಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆತನನ್ನು ದೂರಕ್ಕೆ ತಳ್ಳಿದ್ದಾಳೆ. ಇದರಿಂದ ಮತ್ತಷ್ಟು ಉದ್ರೇಕಗೊಂಡ ಮಾರಯ್ಯ, ಯುವತಿಯ ಬಟ್ಟೆ ಹರಿದು ಹಾಕಿ ವಿವಸ್ತ್ರಗೊಳಿಸಿದ್ದಾನೆ. ಈ ವೇಳೆ ಆತನ ತಾಯಿ ಪಕ್ಕದಲ್ಲಿದ್ದರೂ ಮಗನ ದುಷ್ಕೃತ್ಯ ತಡೆಯುವ ಪ್ರಯತ್ನ ಮಾಡಿಲ್ಲ. ಅದೇ ಮಾರ್ಗವಾಗಿ ಬೈಕ್ನಲ್ಲಿ ಸಾಗುತ್ತಿದ್ದ ಮಹಿಳೆಯೊಬ್ಬರು ಈ ಕೃತ್ಯ ತಡೆಯಲು ಯತ್ನಿಸಿದ್ದು, ಪೆದ್ದ ಮಾರಯ್ಯ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಆದರೂ ಜನರು ಆಕೆಯ ನೆರವಿಗೆ ಬಂದಿಲ್ಲ. ಆರೋಪಿ ಸ್ಥಳದಿಂದ ತೆರಳಿದ ಬಳಿಕ ಕೆಲವರು ಬಂದು ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಯುವತಿಯನ್ನು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here