ಸತ್ತು ಬದುಕಿದ ಬಿಜೆಪಿ ನಾಯಕ – ಹರಿದು ಬಂದ ಶುಭ ಹಾರೈಕೆಯ ಮಹಾಪೂರ

ಮಂಗಳೂರು(ಲಕ್ನೋ): ಬಿಜೆಪಿ ನಾಯಕನ ಮೃತದೇಹವನ್ನು ಮನೆಗೆ ತರುವ ವೇಳೆ ಆತ ಮತ್ತೇ ಉಸಿರಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮಹೇಶ್ ಬಘೇಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಮನೆಯವರು ಅವರನ್ನು ಆಗ್ರಾದ ಆಸ್ಪತ್ರೆಗೆ ಕರೆ ತಂದಿದ್ದರು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಹೀಗಾಗಿ ಅಂತಿಮ ಸಂಸ್ಕಾರಕ್ಕಾಗಿ ಅವರ ದೇಹವನ್ನು ಮನೆ ಬಳಿ ತಂದಿದ್ದರು. ಆದರೆ ಅಲ್ಲಿ ಅವರ ದೇಹದಲ್ಲಿ ಚಟುವಟಿಕೆಯನ್ನು ಗಮನಿಸಿದ ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಜೀವಂತವಿರುವುದಾಗಿ ವೈದ್ಯರು ಹೇಳಿದ್ದಾರೆ.

ಪ್ರಸ್ತುತ ಅವರ ಆರೋಗ್ಯ ಸುಧಾರಿಸಿದ್ದು, ಅವರು ಹುಷಾರಾಗುತ್ತಿದ್ದಾರೆ ಎಂದು ಮಹೇಶ್ ಅವರ ಸೋದರ ಲಖನ್ ಸಿಂಗ್ ಬಘೇಲ್ ತಿಳಿಸಿದ್ದಾರೆ. ಈ ನಡುವೆ ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸಂತಾಪ ಶ್ರದ್ಧಾಂಜಲಿ ಮಹಾಪೂರವೇ ಹರಿದು ಬಂದಿದೆ. ಆದರೆ ಅವರು ಬದುಕಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಚೇತರಿಕೆಗೆ ಅನೇಕರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here