ಜನ್ಮ ನೀಡಿದ ಅಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ

ಮಂಗಳೂರು(ಶಿವಮೊಗ್ಗ): ತಾಯಿಯ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿ ಇಲ್ಲ. ತಾಯಿಗಿಂತ ದೊಡ್ಡ ದೇವರಿಲ್ಲ. ಆದರೆ ಇಲ್ಲೋರ್ವ ಪಾಪಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.

ಭದ್ರಾವತಿಯ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಲೋಚನಮ್ಮ(60) ತನ್ನ ಮಗನಿಂದಲೇ ಹತ್ಯೆಗೀಡಾದ ನತದೃಷ್ಟ ಮಹಿಳೆಯಾಗಿದ್ದು, ಈಕೆಯ ಮಗ ಸಂತೋಷ್ (40) ಹತ್ಯೆ ಆರೋಪಿಯಾಗಿದ್ದಾನೆ. ನೆರೆಹೊರೆಯ ಮನೆಯವರು ಸುಲೋಚನಮ್ಮನವರಿಗೆ ಊಟ ಕೊಡಲೆಂದು ಬಂದಾಗ ಕೊಲೆ ನಡೆದಿರು ವಿಚಾರ ಬೆಳಕಿಗೆ ಬಂದಿದೆ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸಂತೋಷ್ ಜಮೀನನಲ್ಲಿ ಮಲಗಿದ್ದ. ಸದ್ಯ ಸಂತೋಷ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here