ಮಂಗಳೂರಿಗೆ ಶೀ್ಘ್ರದಲ್ಲಿಯೇ ಬರಲಿದೆ ವಂದೇ ಭಾರತ್‌ ರೈಲು

ಮಂಗಳೂರು:ದೇಶದ ರೈಲ್ವೆ ವಲಯದಲ್ಲಿ ಕ್ರಾಂತಿ ಎಬ್ಬಿಸಿದ ವಂದೇ ಭಾರತ್‌ ರೈಲು ಸೇವೆ ಇನ್ನು ಮಂಗಳೂರಿಗೂ ಲಭ್ಯವಾಗಲಿದೆ.

ಕೇರಳಕ್ಕೆ ರೈಲು ಮಂಜೂರು ಮಾಡಿರುವುದು ದೃಢಪಟ್ಟಿದ್ದು, ರೈಲನ್ನು ಪಾಲಕ್ಕಾಡ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಮಾರ್ಗಗಳು ಇನ್ನೂ ಅಂತಿಮಗೊಂಡಿಲ್ಲ. ಬಲ್ಲ ಮೂಲಗಳ ಪ್ರಕಾರ, ಒಂದು ವಾರದಲ್ಲಿ ಮಾರ್ಗಗಳನ್ನು ಖಚಿತಪಡಿಸಲಾಗುವುದು. ಮಂಗಳೂರು-ತಿರುವನಂತಪುರಂ, ಮಂಗಳೂರು-ಎರ್ನಾಕುಲಂ, ಮಂಗಳೂರು-ಕೊಯಮತ್ತೂರು ಮತ್ತು ಗೋವಾ-ಎರ್ನಾಕುಲಂ ಸೇರಿದಂತೆ ಸಂಭಾವ್ಯ ಮಾರ್ಗಗಳನ್ನು ಪರಿಗಣಿಸಲಾಗುವುದು ಎಂದು ತಿಳಿದುಬಂದಿದೆ. ಚೆನ್ನೈನಲ್ಲಿ ವಂದೇ ಭಾರತ್‌ ಲೋಕೋ ಪೈಲಟ್‌ಗಳಿಗೆ ತರಬೇತಿ ಕೂಡ ಆರಂಭವಾಗಿದ್ದು, ಮಂಗಳೂರಿನಲ್ಲಿ ಪಿಟ್‌ಲೈನ್ ಕೂಡ ಸ್ಥಾಪಿಸಲಾಗಿದೆ. ಈಗಾಗಲೇ ಸೇವೆಯಲ್ಲಿರುವ ಮೊದಲ ಕೇರಳದ ವಂದೇ ಭಾರತ್ ತಿರುವನಂತಪುರದಿಂದ ಬೆಳಿಗ್ಗೆ 5:20 ಕ್ಕೆ ಹೊರಟು ಮಧ್ಯಾಹ್ನ 1:20 ಕ್ಕೆ ಕಾಸರಗೋಡು ತಲುಪುತ್ತದೆ. ವರದಿಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅದೇ ಸಮಯದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here