ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ – “ಉಡ” ಕೊಂದ ಆರೋಪ – ದೇವಸ್ಯಮುಡೂರು ನಿವಾಸಿ ಯುವಕನ ವಿರುದ್ಧ ದೂರು ದಾಖಲು

ಮಂಗಳೂರು: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ “ಉಡ”ವೊಂದನ್ನು ಕೊಂದದ್ದಲ್ಲದೇ ಅದರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಆರೋಪದ ಮೇಲೆ ಬಂಟ್ವಾಳ ತಾಲೂಕು ದೇವಸ್ಯಮುಡೂರು ಜನತಾ ಕಾಲನಿ ನಿವಾಸಿ ಡೀಕಯ್ಯ ಎಂಬವರ ಪುತ್ರ ಸುಧಾಕರ್‌ ಎಂಬಾತನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಅ.12ರಂದು ದೂರು ದಾಖಲಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 9, 39, 44, 49 ರಂತೆ 2(16)(ಎ), 2(5), 50, 51, 56, 57ರಂತೆ ದೂರು ದಾಖಲಾಗಿದೆ. ಆರೋಪಿ ಸುಧಾಕರ್‌ ತಲೆಮರೆಸಿಕೊಂಡಿದ್ದು ಸರ್ಚ್‌ ವಾರೆಂಟ್‌ ಹೊರಡಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಂಧನಕ್ಕೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here