ಗುಜರಾತ್ ರಾಜ್ಯಾದ್ಯಂತ ಭಾರೀ ಮಳೆ-ಸಿಡಿಲು ಬಡಿದು 27 ಮಂದಿ, 71 ಜಾನುವಾರು ಸಾವು

ಮಂಗಳೂರು(ಗುಜರಾತ್): ಗುಜರಾತ್ ನಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ರಾಜ್ಯದ 251 ತಾಲೂಕುಗಳ ಪೈಕಿ 230ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು, ಮಿಂಚು ಸಹಿತ ಅಕಾಲಿಕ ಮಳೆಯಾಗಿದೆ.

ನ.27ರಂದು ರಾಜ್ಯದ ಹಲವೆಡೆ ಸಿಡಿಲು ಬಡಿದು 27 ಮಂದಿ ಸಾವನ್ನಪ್ಪಿದ್ದಾರೆ. ದೌದ್, ಭರೂಚ್, ತಾಪಿ, ಅಹಮದಾಬಾದ್, ಅಮ್ರೆಲ್ಲಿ, ಬನಸ್ಕಾಂತ, ಬೋತದ್, ಖೇಡಾ, ಮೆಹ್ ಸನಾ, ಪಂಚ ಮಹಲ್, ಸಬರ್ ಕಾಂತ, ಸೂರತ್, ಸುರೇಂದ್ರನಗರ ಮತ್ತು ದೇವಭೂಮಿ ದ್ವಾರಕಾದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ನ ಮಾಹಿತಿಯ ಪ್ರಕಾರ, ನ.27ರ ಮಧ್ಯಾಹ್ನದ ವೇಳೆಗೆ 71 ಪ್ರಾಣಿಗಳು ಗುಡುಗಿಗೆ ಬಲಿಯಾಗಿವೆ. ಭಾರೀ ಮಳೆಯಿಂದಾಗಿ 23 ಮಂದಿ ಗಾಯಗೊಂಡಿದ್ದು, 29 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here