ಸಿಲ್ಕ್ಯಾರ ಸುರಂಗದಲ್ಲಿ ರೋಚಕ ಕಾರ್ಯಾಚರಣೆ. 41 ಜನ ಕಾರ್ಮಿಕರ ಜೀವ ಉಳಿಸಿದ ಎನ್‌ಡಿಆರ್‌ಎಫ್ ರ‍್ಯಾಟ್‌ ಹೋಲ್‌ ಮೈನಿಂಗ್ ಪರಿಣಿತ ತಂಡ

ಮಂಗಳೂರು: ಉತ್ತರಕಾಶಿಯ ಸಿಲ್ಕ್ಯಾರ ಸುರಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಎನ್ ಡಿ ಆರ್ ಎಫ್ ತಂಡದ ಜೊತೆ ಇಲಿ ಬಿಲ್ ಪರಿಣಿತರ ತಂಡದ ಸಾಹಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ವಕೀಲ್ ಖಾನ್ ಮತ್ತು ಮುನ್ನಾ ಖುರೇಷಿ ನೇತೃತ್ವದಲ್ಲಿ ದೆಹಲಿಯಿಂದ ಇಲಿ ಗಣಿಗಾರಿಕೆಯ 11 ಪುರುಷರ ತಂಡ ಆಗಮಿಸಿ ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, 2014 ರಲ್ಲಿ ಇಲಿ ಬಿಲ್ ರಂದ್ರಗಣಿಗಾರಿಕೆಯನ್ನು ( ರ‍್ಯಾಟ್‌ ಹೋಲ್‌ ಮೈನಿಂಗ್ ) ನಿಷೇಧಿಸಿ ಇದು ಅವೈಜ್ಞಾನಿಕ ಎಂದು ಹೇಳಿತ್ತು.

ಇಲಿ ಬಿಲ್ ರಂದ್ರಗಣಿಗಾರಿಕೆ ತಂಡ, ಶಿಲಾಖಂಡರಾಶಿಗಳ ರಾಶಿಗೆ ಕೈಯಾರೆ ಕೊಳವೆಗಳನ್ನು ಕೊರೆದು ಸಾಹಸ ಮೆರೆದಿದೆ. ಈ ತಂಡವು ಅತ್ಯಂತ ಕಷ್ಟಕರವಾದ ಕೆಲಸವನ್ನು ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲಿ ಸಾಧಿಸಿದೆ. ಈ ಕಾರ್ಮಿಕ ಯೋಧರ ಅಸಾಧಾರಣ ಪ್ರಯತ್ನಗಳು ಮತ್ತು ಧೈರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ ಮತ್ತು ಅವರಿಗೆ ಸರಿಯಾದ ಗೌರವವನ್ನು ನೀಡಬೇಕೆಂದು, ನೆಟ್ಟಿಗರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್ ಎಫ್ ಸೇರಿದಂತೆ ಎಲ್ಲಾ ಏಜೆನ್ಸಿಗಳು ಮತ್ತು ಪರಿಹಾರ ಕಾರ್ಯಕರ್ತರ ಶ್ರಮ ಫಲ ನೀಡಿದ್ದು, ಐತಿಹಾಸಿಕ ಕಾರ್ಯಾಚರಣೆಗೆ ಕೋಟ್ಯಾಂತರ ಭಾರತೀಯರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here