ಹರಿಯಾಣದ ಗುರುಗಾಂವ್‌ ಮೂಲದ ಯುವಕ – ಮಂಗಳಾ ಈಜುಕೊಳದಲ್ಲಿ ಮುಳುಗಿ ಸಾವು

ಮಂಗಳೂರು: ಇಲ್ಲಿನ ಮಂಗಳಾ ಸ್ಟೇಡಿಯಂನ ಈಜುಕೊಳದಲ್ಲಿ ಯುವಕ ಈಜುತ್ತಿರುವಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಡಿ.12ರಂದು ನಡೆದಿದೆ.

ಹರಿಯಾಣದ ಗುರುಗಾಂವ್‌ ಮೂಲದ ಅಭಿಷೇಕ್ ಆನಂದ್ (30) ಮೃತ ವ್ಯಕ್ತಿ. ಮಂಗಳವಾರ ಸಂಜೆ 5 ಗಂಟೆಯ ವೇಳೆಗೆ ಅಭಿಷೇಕ್ ಈಜುಕೊಳಕ್ಕೆ ಬಂದಿದ್ದು ಟಿಕೆಟ್ ಪಡೆದು ಈಜಲು ಮುಂದಾಗಿದ್ದ. ಇದೇ ವೇಳೆ, ಅಭಿಷೇಕ್ ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ. ಸಂಜೆ 6 ಗಂಟೆ ವೇಳೆಗೆ ಮಕ್ಕಳು ಈಜುತ್ತಿದ್ದಾಗ ನೀರಿನ ಅಡಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಗಮನಿಸಿ ಕೋಚ್ ಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದ್ದಲ್ಲದೆ, ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿಯೇ ಯುವಕ ಮೃತಪಟ್ಟಿದ್ದ. ಅಭಿಷೇಕ್ ಮಂಗಳೂರಿನಲ್ಲಿ ಗ್ಯಾರೇಜೊಂದರಲ್ಲಿ ಕೆಲಸಕ್ಕಿದ್ದು, ಕೆಲವು ಬಾರಿ ಈಜುಕೊಳಕ್ಕೆ ಬರುತ್ತಿದ್ದ ಎನ್ನುವ ಮಾಹಿತಿ ಇಲ್ಲಿನ ಸಿಬ್ಬಂದಿ ತಿಳಿದು ಬಂದಿದೆ. ಅಭಿಷೇಕ್ ಮಂಗಳೂರಿನಲ್ಲಿ ಯಾವುದೇ ಸಂಬಂಧಿಕರನ್ನು ಹೊಂದಿಲ್ಲ. ಹೀಗಾಗಿ ಆತನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

LEAVE A REPLY

Please enter your comment!
Please enter your name here