ಕಾಪು ಲೀಲಾಧರ ಶೆಟ್ಟಿ ಪುತ್ರಿಯ ಅಪಹರಣ ಪ್ರಕರಣ – ಸ್ನೇಹಿತ ಸೇರಿದಂತೆ  ನಾಲ್ವರ ಬಂಧನ

ಮಂಗಳೂರು (ಕಾಪು): ಸಮಾಜ ಸೇವಕ ದಿ.ಲೀಲಾಧರ ಶೆಟ್ಟಿ ಅವರ ಪುತ್ರಿಯ ಅಪಹರಣ ಪ್ರಕರಣ ಸಂಬಂಧ ಪುತ್ರಿಯ ಸ್ನೇಹಿತ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಾಪು ಪೊಲೀಸರು ಕಾಸರಗೋಡಿನ ಕುಂಬ್ಳೆಯಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಪುತ್ರಿಯ ಸ್ನೇಹಿತನಾದ ಶಿರ್ವ ನಿವಾಸಿ ಗಿರೀಶ್ (20), ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಜೀಜ್ ಎಂದು ಗುರುತಿಸಲಾಗಿದೆ.

ಲೀಲಾಧರ ಶೆಟ್ಟಿ ಅವರ ದತ್ತು ಪುತ್ರಿ ಡಿ.11ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾದ ಚಿಂತೆಯಲ್ಲಿ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಮರ್ಯಾದೆಗೆ ಅಂಜಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಪಹರಣ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಗಿರೀಶ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಉಳಿದ ಮೂವರ ವಿರುದ್ಧ ಅಪಹರಣಕ್ಕೆ ನೆರವು ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here