ಕಬ್ಬಿನ ಸಿಪ್ಪೆ ತುಂಬಿದ್ದ ಲಾರಿಗೆ ವಿದ್ಯುತ್‌ ತಂತಿ ತಗುಲಿ ಬೆಂಕಿ

ಮಂಗಳೂರು(ಹುಣಸೂರು): ಕಬ್ಬಿನ ಸಿಪ್ಪೆ ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್‌ ತಂತಿ ತಗುಲಿ ಕಬ್ಬಿನ ಸಿಪ್ಪೆ ಸಂಪೂರ್ಣ ಭಸ್ಮವಾದ ಘಟನೆ ಹುಣಸೂರು ಸಮೀಪದ ಎಚ್‌.ಡಿ.ಕೋಟೆ ರಸ್ತೆಯ ಹಂಚ್ಯಾ ಗ್ರಾಮದ ಬಳಿ ಡಿ.19ರಂದು ನಡೆದಿದೆ.

ಲಾರಿಯಲ್ಲಿ ಎತ್ತರವಾಗಿ ಕಬ್ಬಿನ ಸಿಪ್ಪೆ ತುಂಬಿದ್ದರಿಂದಾಗಿ ಹಂಚ್ಯಾ ಬಳಿಯ ರಸ್ತೆಗೆ ಅಡ್ಡಲಾಗಿ ಹಾಕಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಪಕ್ಕದ ಜಮೀನಿನಲ್ಲಿದ್ದ ಬೋರ್‌ವೆಲ್‌ ನಿಂದ ಪೈಪ್‌ ಮೂಲಕ ನೀರು ಹಾಯಿಸಿದರಾದರೂ ದಟ್ಟ ಹೊಗೆ ಆವರಿಸಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲಾಯಿತು. ಲಾರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here