ಹುಣಸೂರು ಬಳಿ ಬಸ್‌–ಜೀಪ್‌ ಅಪಘಾತ – ಸ್ಥಳದಲ್ಲೇ ನಾಲ್ಕು ಸಾವು

ಮಂಗಳೂರು(ಮೈಸೂರು): ಕೆಎಸ್ಆರ್ಟಿಸಿ ಬಸ್ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಆರ್ ಟಿ ಒ ಕಚೇರಿ ಬಳಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಸೇರಿದಂತೆ ಕೂಲಿ ಕಾರ್ಮಿಕರಾದ ರಾಜೇಶ್, ಲೋಕೇಶ್, ಸೋಮೇಶ್ ಮೃತಪಟ್ಟಿದ್ದಾರೆ.

ಕೆಎಸ್ಆರ್ಟಿಸಿ ಬಸ್ ವಿರಾಜಪೇಟೆಯಿಂದ ಬೆಂಗಳೂರಿನ ಕಡೆಗೆ ಬರುವ ವೇಳೆ ದುರಂತ ಸಂಭವಿಸಿದೆ. ಜೀಪ್ ನಲ್ಲಿದ ಕಾರ್ಮಿಕರು ಅಂತರಸಂತೆ ಜಿ.ಆರ್.ಕಾಲೋನಿ ನಿವಾಸಿಗಳಾಗಿದ್ದು, ಶುಂಠಿ ಕೀಳಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here