ಸಮಸ್ತ ಶತಮಾನೋತ್ಸವ ಸಮ್ಮೇಳನಕ್ಕೆ ಸಿಎಂ, ಡಿ.ಸಿ.ಎಂ ಗೆ ಆಹ್ವಾನ ನೀಡಿದ ಕೇಂದ್ರ ಮುಶಾವರ ಸದಸ್ಯ ಅಲ್ ಹಾಜ್‌ ಅಬ್ದುಲ್‌ ಖಾದರ್‌ ಮುಸ್ಲಿಯಾರ್ (ಬಂಬ್ರಾಣ ಉಸ್ತಾದ್) 

ಮಂಗಳೂರು: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಸಂಘಟನೆಯ ಶತಮಾನೋತ್ಸವದ ಉದ್ಘಾಟನೆ ಜ.28ರಂದು ನಡೆಯಲಿದೆ.

ಬೆಂಗಳೂರಿನ ಅರೆಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಮತ್ತು ಬೆಂಗಳೂರು ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಅವರನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಲ್ ಹಾಜ್‌ ಅಬ್ದುಲ್‌ ಖಾದರ್‌ ಮುಸ್ಲಿಯಾರ್ (ಬಂಬ್ರಾಣ ಉಸ್ತಾದ್) ಆಹ್ವಾನಿಸಿದರು. ಈ ವೇಳೆ ಸಮಸ್ತದ ಹಲವು ನಾಯಕರು ಉಪಸ್ಥಿತರಿದ್ದರು. ಜ.28ರಂದು ಬೆಂಗಳೂರಿನ ಅರೆಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷದಷ್ಟು ಜನರು ಭಾಗವಹಿಸುವ ನಿರೀಕ್ಷೆಯಿದ್ದು ಭರದ ಸಿದ್ದತೆ ನಡೆಯುತ್ತಿದೆ. 2026ರಲ್ಲಿ ಶತಮಾನೋತ್ಸವದ ಸಮಾರೋಪ ಸಮಾರಂಭ ಕೇರಳದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here