ಕತ್ತು ಹಿಸುಕಿ ಉದ್ಯಮಿ ಪತ್ನಿಯ ಹತ್ಯೆ – ಪತಿ, ಮಕ್ಕಳು ಇಲ್ಲದ ವೇಳೆ ಈ ಕೃತ್ಯ – ಹಂತಕನಿಗೆ ಬಲೆ ಬೀಸಿದ ಪೊಲೀಸರು

ಮಂಗಳೂರು (ಬೆಂಗಳೂರು): ಮನೆಯಲ್ಲಿ ಏಕಾಂಗಿಯಾಗಿದ್ದಾಗ ಹಾರ್ಡ್‌ವೇರ್ ಮಳಿಗೆ ಮಾಲಕರೊಬ್ಬರ ಪತ್ನಿಯನ್ನು ಹಂತಕನೊಬ್ಬ ಕುತ್ತಿಗೆ ಹಿಸುಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.4ರಂದು ನಡೆದಿದೆ. ಪ್ರಭಾಕರ ರೆಡ್ಡಿ ಲೇಔಟ್‌ ನಿವಾಸಿ ನೀಲಂ (30) ಕೊಲೆಯಾದ ದುರ್ದೈವಿ. ಈ ಕೃತ್ಯದಲ್ಲಿ ಮೃತರ ಪರಿಚಿತನ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಪತಿ ಹಾಗೂ ಮಕ್ಕಳು ಹೊರಗೆ ಹೋದ ಬಳಿಕ ನೀಲಂ ಒಬ್ಬರೇ ಮನೆಯಲ್ಲಿದ್ದರು. ಆ ವೇಳೆ ಅವರ ಮನೆಯೊಳಗೆ ಪ್ರವೇಶಿಸಿರುವ ಹಂತಕ ನೀಲಂ ಅವರನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೆಲ ಹೊತ್ತಿನ ಬಳಿಕ ಶಾಲೆಗೆ ಮುಗಿಸಿ ಮೃತರ ಕಿರಿಯ ಪುತ್ರ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here