ರಾಜ್ಯಸಭಾ ಚುನಾವಣೆ-ರಾಜ್ಯದ 4 ಸ್ಥಾನಗಳ ಫಲಿತಾಂಶ ಪ್ರಕಟ-ಕಾಂಗ್ರೆಸ್‌ 3,‌ ಬಿಜೆಪಿ ಗೆ 1, ಕುಪೇಂದ್ರ ರೆಡ್ಡಿಗೆ ಸೋಲು

ಮಂಗಳೂರು(ಬೆಂಗಳೂರು): ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ(47 ಮತ), ಕಾಂಗ್ರೆಸ್‌ನ 3 ಅಭ್ಯರ್ಥಿಗಳಾದ ಅಜಯ್‌ ಮಕೇನ್‌(47 ಮತ), ನಾಸೀರ್‌ ಹುಸೇನ್‌(47 ಮತ) ಹಾಗೂ ಚಂದ್ರಶೇಖರ್‌(45 ಮತ) ಗೆಲುವು ಸಾಧಿಸಿದ್ದಾರೆ. ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್‌ ಡಿ ಎ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.

ಇಂದು ನಡೆದ ಮತದಾನದಲ್ಲಿ ಒಟ್ಟು 223 ಶಾಸಕರ ಪೈಕಿ 222 ಶಾಸಕರು ಮತದಾನ ಮಾಡಿದ್ದಾರೆ. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಮತದಾನಕ್ಕೆ ಗೈರಾಗಿದ್ದರೆ ಯಶವಂತಪುರದ ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ಸ್ವಪಕ್ಷ ಅಭ್ಯರ್ಥಿ ಬದಲು ಕಾಂಗ್ರೆಸ್‌ ಅಭ್ಯರ್ಥಿಗೆ ಮತಹಾಕುವ ಮೂಲಕ ಬಿಜೆಪಿಗೆ ಶಾಕ್‌ ನೀಡಿದ್ದಾರೆ.

LEAVE A REPLY

Please enter your comment!
Please enter your name here