ಸ್ಕೂಟರ್ ಗೆ ಜೀಪು ಡಿಕ್ಕಿ-ಸ್ಕೂಟರ್ ಸವಾರರಿಬ್ಬರು ಮೃತ್ಯು

ಮಂಗಳೂರು(ಸುರತ್ಕಲ್): ಜೀಪೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ದ್ವಿಚಕ್ರ ಸವಾರಿಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸೂರಜ್ ಇಂಟರ್‌ ನ್ಯಾಷನಲ್ ಬಳಿ ಮಾ.25 ರಂದು ನಡೆದಿದೆ.

ಮೃತರನ್ನು ನೋಣಯ್ಯ ಬಂಗೇರ ವಿದ್ಯಾನಗರ ಕುಳಾಯಿ ಮತ್ತು ಸುರತ್ಕಲ್‌ ಕಾನ ನಿವಾಸಿ ನಿಯಾಝ್‌ (47) ಎಂದು ಗುರುತಿಸಲಾಗಿದೆ. ಇಬ್ಬರೂ ಬೀಡಿ ಕಾಂಟ್ರಾಕ್ಟರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.‌ ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಜೀಪ್‌ ಸೂರಜ್‌ ಇಂಟರ್‌ ನ್ಯಾಷನಲ್‌ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ನೋಣಯ್ಯ ಮತ್ತು ನಿಯಾಝ್‌ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಮಂಗಳೂರು ನಿವಾಸಿ ಪ್ರತಾಪ್‌ ಎಂಬಾತನ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here