ಬೆಂಬಲಿಗರ ಜೊತೆ ಇಂದು ಮಹತ್ವದ ಸಭೆ – ಮಂಡ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ

ಮಂಗಳೂರು (ಬೆಂಗಳೂರು): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾಗಿ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ, ಪಕ್ಷಕ್ಕೆ ಸಹಕಾರ ನೀಡುವಂತೆ ಸುಮಲತಾ ಅವರಲ್ಲಿ ಕೇಳಿಕೊಂಡ ಬೆನ್ನಲ್ಲೇ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸುಮಲತಾ ತಿಳಿಸಿದ್ದಾರೆ. ಬಿಜೆಪಿಗೆ ಬೆಂಬಲಿಸುವುದು ಒಂದು ಕಡೆಯಾದರೆ, ನನ್ನ ಬೆಂಬಲಿಗರ ನಿಲುವು ನನ್ನ ಆದ್ಯತೆ. ಕೆಲ ದಿನಗಳಲ್ಲಿ ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದು, ಇಂದು ಬೆಂಬಲಿಗರ ಸಭೆ ನಡೆಯಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಸುಮಲತಾ, ಮಂಡ್ಯದಲ್ಲಿ ಬಿಜೆಪಿ ಸೀಟ್ ಉಳಿಸಿಕೊಂಡಿದ್ರೆ ಒಳ್ಳೆಯ ಫೈಟ್ ನೀಡಬಹುದಿತ್ತು. ಆಗಿ ಹೋಗಿರೋದನ್ನು ಮಾತನಾಡಿ ಈಗ ಪ್ರಯೋಜನವಿಲ್ಲ. ನನಗೆ ಬೇರೆ ಪಕ್ಷಗಳಿಂದ ಹಲವು ಆಫರ್ ಇದ್ದವು. ಮಂಡ್ಯ ಬಿಟ್ಟು ಎಲ್ಲೂ ನಿಲ್ಲಲ್ಲ ಅಂತಾ ಹೇಳಿದೆ. ನನ್ನ ಗುರುತು, ನನ್ನ ಅಸ್ತಿತ್ವ ಮಂಡ್ಯ. ನನಗೆ ಯಾರು ಹತ್ತಿರವೂ ಕೇಳೋ ಅಭ್ಯಾಸ ಇಲ್ಲ.  ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರ ನಿರ್ಧಾರದಂತೆ ನಡೆಯುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here