ಬೆಂಗಳೂರಿನಲ್ಲೊಂದು ಭಯಾನಕ ಆಕ್ಸಿಡೆಂಟ್-ಬೈಕ್‌ ಸವಾರನಿಗೆ ಗುದ್ದಿದ ಕೋಲೆ ಬಸವ

ಮಂಗಳೂರು(ಬೆಂಗಳೂರು): ಬೆಂಗಳೂರಿನಲ್ಲಿ ಭಯಾನಕ ಅಪಘಾತವೊಂದು ಸಂಭವಿಸಿದೆ. ರಸ್ತೆ ಬದಿ ಬರುತ್ತಿದ್ದ ಕೋಲೆ ಬಸವ ಇದ್ದಕ್ಕಿದ್ದಂತೆ ಬೈಕ್ ಸವಾರನಿಗೆ ಗುಮ್ಮಿದ್ದು, ಬೈಕ್ ಸವಾರ ಈಚರ್ ವಾಹನದ ಕೆಳಗೆ ಬಿದ್ದಿದ್ದಾನೆ. ಪವಾಡ ಸದೃಶ ರೀತಿಯಲ್ಲಿ ಬೈಕ್ ಸವಾರ ಪಾರಾಗಿದ್ದಾನೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿ ಸಂಭವಿಸಿರುವ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಲೆ ಬಸವ ಗುಮ್ಮುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಈಚರ್ ವಾಹನದ ಕೆಳಗೆ ಹೋಗಿ ಬೈಕ್ ಸವಾರ ಬಿದ್ದಿದ್ದು, ಈಚರ್ ವಾಹನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾನೆ.

LEAVE A REPLY

Please enter your comment!
Please enter your name here