ಪುತ್ತೂರು ವಕೀಲರ ಸಂಘದ ಚುನಾವಣೆ- ಫಲಿತಾಂಶ ಪ್ರಕಟ

ವಕೀಲರ ಸಂಘದ ಅಧ್ಯಕ್ಷರಾಗಿ ಜಿ ಜಗನ್ನಾಥ ರೈ,
ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಚಿನ್ಮಯ್ ರೈ ಈಶ್ವರಮಂಗಲ ಅವಿರೋಧ ಆಯ್ಕೆ

ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ 2024 – 25 ರಿಂದ 2025-26ರ ಸಾಲಿನ 2 ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯ ಚುನಾವಣೆ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ ಗೆಲುವನ್ನು ಸಾಧಿಸಿದ್ದಾರೆ.

ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಜತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ, ಕೋಶಾಧಿಕಾರಿಯಾಗಿ ಮಹೇಶ್ ಕೆ.ಸವಣೂರು ಗೆಲುವನ್ನು ಸಾಧಿಸಿದ್ದಾರೆ. ವಕೀಲರಾದ ಕೆ.ಭಾಸ್ಕರ್ ಕೋಡಿಂಬಾಳ, ಎನ್ ಕಿಶೋರ್ ಕೊಳತ್ತಾಯ, ದೀಪಕ್ ಬೊಳುವಾರು ಅವರು ಚುನಾವಣಾಧಿಕಾರಿಗಳಾಗಿದ್ದರು.

ಶೇ90 ಮತ ಚಲಾವಣೆ:
ವಕೀಲರ ಸಂಘದಲ್ಲಿ 387 ಮಂದಿ ಸದಸ್ಯರು ಮತಚಲಾಯಿಸಲು ಅರ್ಹತೆ ಹೊಂದಿದ್ದು ಒಟ್ಟು 357 ಮಂದಿ ಮತ ಚಲಾಯಿಸಿದ್ದಾರೆ‌. ಮತದಾನವು ವಕೀಲರ ಸಂಘದ ಪರಾಶರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4ರ ತನಕ ನಡೆಯಿತು. ಬಳಿಕ ಚುನವಾಣಾಧಿಕಾರಿಗಳು ಮತ ಪತ್ರಗಳನ್ನು 50 ರ ಕಟ್ಟು ಮಾಡಿ ಸುಮಾರು 4.30 ಕ್ಕೆ ಮತ ಎಣಿಕೆ ಆರಂಭಿಸಿದರು. ಒಟ್ಟು 7 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಸಂಜೆ 6.45 ಗಂಟೆಗೆ ಚುನಾವಣೆ ಫಲಿತಾಂಶ ಘೋಷಣೆ ಮಾಡಲಾಯಿತು.

LEAVE A REPLY

Please enter your comment!
Please enter your name here