ಅಡ್ಡ ಬಂದ ಕಾಡುಹಂದಿ ಗುಂಪು-ಮರಕ್ಕೆ ಡಿಕ್ಕಿಯಾದ ಸ್ಕೂಟರ್-ಯುವಕ ಮೃತ್ಯು

ಮಂಗಳೂರು(ಬೆಳ್ಳಾರೆ): ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಮಿಕ್ಕಳ ನಿವಾಸಿ 10ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಾಝಿಕ್ (16) ಎಂಬ ಯುವಕ ಮೃತಪಟ್ಟಿದ್ದಾರೆ.

ಮರದ ವ್ಯಾಪಾರಿ ಅಬ್ದುಲ್‌ ರಝಾಕ್‌ ಎಂಬವರ ಪುತ್ರನಾಗಿರುವ ಮಹಮ್ಮದ್‌ ರಾಝಿಕ್‌ ಬೆಳ್ಳಾರೆಯಿಂದ ತರಕಾರಿ ಮತ್ತು ಹಣ್ಣುಹಂಪಲು ಖರೀದಿಸಿ ಬೆಳ್ಳಾರೆಯ ಕುಂಡಡ್ಕದಲ್ಲಿರುವ ಅಜ್ಜಿ ಮನೆಗೆ ಸಂಬಂಧಿ ಜೊತೆ ಆಕ್ಟೀವಾದಲ್ಲಿ ತೆರಳುತ್ತಿದ್ದ ವೇಳೆ ಕಾಡುಹಂದಿಗಳ ಗುಂಪೊಂದು ಹಠತ್ತಾಗಿ ರಸ್ತೆ ದಾಟಿದೆ. ಇದನ್ನು ಕಂಡ ಆಕ್ಟೀವಾ ಸವಾರ ಗಾಬರಿಗೊಂಡು ಬ್ರೇಕ್‌ ಹಾಕಿದ್ದು ರಸ್ತೆ ಬದಿಯ ಮರಕ್ಕೆ ಆಕ್ಟೀವಾ ಡಿಕ್ಕಿ ಹೊಡೆದಿದೆ. ಈ ವೇಳೆ ರಾಝಿಕ್‌ ತಲೆ ಮರಕ್ಕೆ ಬಡಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅಲ್ಲಿದ್ದ ಯುವಕರು ರಾಝಿಕ್‌ ನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರು ದಾರಿ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.

LEAVE A REPLY

Please enter your comment!
Please enter your name here