ಮಂಗಳೂರು: ಚುನಾವಣೆ ಅನ್ನೋದು ಪ್ರಜಾಪ್ರಭುತ್ವದ ಹಬ್ಬ. ನಾವು ಇದನ್ನು ಒಳ್ಳೆಯ ರೀತಿಯಲ್ಲಿ ಸಂಭ್ರಮಿಸಬೇಕು.
ಪ್ರೀತಿ ಹಂಚುವ ಕೆಲಸ ಮಾಡಬೇಕು ಧ್ವೇಷ ಕಟ್ಟಿಕೊಳ್ಳುವುದಲ್ಲ ಎಂದು ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮತದಾನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲಿನ ಭೀತಿಗೆ ಒಳಗಾಗಿ ಅಶಾಂತಿ ಉಂಟುಮಾಡಲು ಪ್ರಯತ್ನ ನಡೆಯುತ್ತಿದೆ. ದೇಶದ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಿಂದ ಎಲ್ಲರೂ ಸಹನೆಯಿಂದ ವರ್ತಿಸಬೇಕು
ನಿಮ್ಮನ್ನು ನಂಬಿದ ಕುಟುಂಬಗಳಿದೆ ಎಂಬುವುದನ್ನು ನೆನಪಿಡಬೇಕು. ಕೇಸ್ ಮಾಡಿಕೊಂಡು ಜೈಲಿಗೆ ಹೋದ್ರೆ ನಿಮ್ಮ ಕುಟುಂಬದವರನ್ನ ನೋಡಿಕೊಳ್ಳೋದಿಕ್ಕೆ ಯಾರು ಇರೋದಿಲ್ಲ. ನಿಮ್ಮ ಕೆಲಸ ಏನಿದೆ ಅದನ್ನು ಶಿಸ್ತು ಬದ್ಧವಾಗಿ ಮಾಡಿಕೊಂಡು ಪ್ರೀತಿ ಹಂಚುವ ಮೂಲಕ ಚುನಾವಣೆ ಎದುರಿಸಿ ಎಂದು ಬಿಜೆಪಿ ಮಿತ್ರರಲ್ಲಿ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.