ರೇವಣ್ಣ ಬಂಧನಕ್ಕಾಗಿ 25 ನಿಮಿಷ ಕಾದು ಕುಳಿತ ಎಸ್‌ಐಟಿ ಅಧಿಕಾರಿಗಳು-ಸುಮುಹೂರ್ತದಲ್ಲಿ ಮನೆಯಿಂದ ಹೊರಬಂದ ರೇವಣ್ಣ

ಮಂಗಳೂರು(ಬೆಂಗಳೂರು): ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಈ ಬಂಧನದ ಸಂದರ್ಭದಲ್ಲಿಯೂ ʼಶುಭ ಮುಹೂರ್ತʼಕ್ಕಾಗಿ ಎಸ್‌ಐಟಿ ಅಧಿಕಾರಿಗಳನ್ನೇ ರೇವಣ್ಣ ಅವರು ಕಾಯಿಸಿದ್ದಾರೆ ಎಂದು ವರದಿಯಾಗಿದೆ.

ಎಸ್ ಐಟಿ ಅಧಿಕಾರಿಗಳು ಎಚ್‌.ಡಿ.ದೇವೇಗೌಡ ಮನೆಗೆ ತೆರಳಿದಾಗ ಎಚ್.ಡಿ.ರೇವಣ್ಣ ಮನೆಯಿಂದ ಹೊರಬರಲು ಶುಭ ಗಳಿಗೆಗಾಗಿ ಕಾದು ಕುಳಿತಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೇವಣ್ಣ ಅವರನ್ನು ಬಂಧಿಸಲು ಬಂದ ಅಧಿಕಾರಿಗಳನ್ನು ಸುಮಾರು 25 ನಿಮಿಷ ಎಚ್.ಡಿ ದೇವೇಗೌಡ ಅವರ ಮನೆ ಬಾಗಿಲಲ್ಲಿ ಕಾಯಬೇಕಾಗಿ ಬಂದ ವಿಷಯ ಬೆಳಕಿಗೆ ಬಂದಿದೆ. ಎಸ್‌ಐಟಿ ಅಧಿಕಾರಿಗಳ ಬಳಿ ಸುಮಾರು 25 ನಿಮಿಷದ ಬಳಿಕ ಹೊರ ಬರುವುದಾಗಿ ಎಚ್.ಡಿ.ರೇವಣ್ಣ ತಿಳಿಸಿದ್ದರು ಎನ್ನಲಾಗಿದೆ. ಸಂಜೆ 6.50ರ ಶುಭ ಘಳಿಗೆಯಲ್ಲಿ ಎಚ್.ಡಿ ರೇವಣ್ಣ ಮನೆಯಿಂದ ಹೊರಬಂದಿದ್ದು, ಎಸ್‌ಐಟಿ ಅಧಿಕಾರಿಗಳ ತಂಡ ಬಳಿಕ ಅವರನ್ನು ವಶಕ್ಕೆ ಪಡೆದಿದೆ.

LEAVE A REPLY

Please enter your comment!
Please enter your name here