ವೈರಲ್ ಆದ ಕಂಗನಾ ರಣಾವತ್ ನುಡಿಮುತ್ತು-ನವರಾತ್ರಿ ಮುನ್ನಾ ದಿನ ಸಂಸದ ತೇಜಸ್ವಿ ಸೂರ್ಯ ಮೀನು ತಿಂತಾರೆ

ಮಂಗಳೂರು(ಹಿಮಾಚಲ ಪ್ರದೇಶ): ನವರಾತ್ರಿ ಮುನ್ನಾ ದಿನ ಸಂಸದ ತೇಜಸ್ವಿ ಸೂರ್ಯ ಅವರು ಮೀನು ತಿನ್ನುತ್ತಾರೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,‌ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಕಂಗನಾ ಅವರು ಶನಿವಾರ ಚುನಾವಣಾ ರ್‍ಯಾಲಿಯಲ್ಲಿ ಭಾಷಣ ಮಾಡುವಾಗ ತಮ್ಮದೇ ಪಕ್ಷದ ನಾಯಕ ತೇಜಸ್ವಿ ಸೂರ್ಯ ಹೆಸರನ್ನು ತಪ್ಪಾಗಿ ಬಳಸಿ ನಡೆಸಿದ ವಾಗ್ದಾಳಿಯ ವಿಡಿಯೋ ವೈರಲ್ ಆಗಿದ್ದು, ಟ್ರೋಲಿಗರ ಟೀಕೆಗೆ ತುತ್ತಾಗಿದ್ದಾರೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೆಸರು ಬಳಸುವ ಬದಲು ತಪ್ಪಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹೆಸರು ಬಳಸಿದ್ದಾರೆ. ತೇಜಸ್ವಿ ಸೂರ್ಯ ಅವರನ್ನು ಗೂಂಡಾಗಿರಿ ಮಾಡುತ್ತಾ ನವರಾತ್ರಿಯ ಮುನ್ನಾದಿನದಂದು ಮೀನು ತಿನ್ನುತ್ತಾರೆ ಎಂದು ಆರೋಪಿಸಿದ್ದಾರೆ.

ತೇಜಸ್ವಿ ಯಾದವ್ ಅವರು ಏಪ್ರಿಲ್ 9 ರಂದು ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಚುನಾವಣೆಯ ಪ್ರಚಾರದ ನಂತರ ನಂತರ ಫಿಶ್ ಫ್ರೈ ತಿನ್ನುತ್ತಿದ್ದರು. ಈ ಬಗ್ಗೆ ಟೀಕೆ ಮಾಡಲು ಮುಂದಾದ ಕಂಗನಾ ತಾವೇ ಟೀಕೆಗೆ ಒಳಗಾಗಿದ್ದಾರೆ. ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್, ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯಲು ಬಯಸುತ್ತಿರುವ ರಾಹುಲ್ ಗಾಂಧಿಯಾಗಲಿ, ವಿಚಿತ್ರವಾಗಿ ಮಾತನಾಡುವ ಅಖಿಲೇಶ್ ಯಾದವ್, ಗೂಂಡಾಗಿರಿ ಮಾಡುವ ‘ತೇಜಸ್ವಿ ಸೂರ್ಯ’ ಅವರೇ ಆಗಲಿ, ಅದೆಲ್ಲ ಹಾಳಾದ ರಾಜಕುಮಾರರ ಪಕ್ಷ ಎಂದು ಟೀಕಿಸಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here