ಮುಸ್ತಫಾ ಪೈಚಾರ್ ಬಂಧನ ಖುಷಿ ತಂದಿದೆ- ನೂತನ ಪ್ರವೀಣ್ ನೆಟ್ಟಾರ್

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ನಾಲ್ಕನೇ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ನನ್ನು ಎನ್‌ ಐ ಎ ಅಧಿಕಾರಿಗಳು ಬಂಧಿಸಿದ್ದು, ನೆಟ್ಟಾರ್ ಪತ್ನಿ ನೂತನ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವೀಣ್ ನೆಟ್ಟಾರ್ ಪತ್ನಿ ನೂತನ, ಮುಸ್ತಫಾ ಪೈಚಾರ್ ಪ್ರಮುಖ ಆರೋಪಿಯಾಗಿದ್ದ. ಆತನೇ ಗಂಡನ ಹತ್ಯೆಗೆ ಪ್ಲಾನ್ ಗಳನ್ನು ಮಾಡಿದ್ದ. ಮುಸ್ತಫಾ ನ ಬಂಧನವಾಗಿರುವುದು ನಮಗೆ ಖುಷಿ ತಂದಿದೆ. ಇನ್ನೂ ತಲೆಮರೆಸಿಕೊಂಡವರನ್ನು ಶೀಘ್ರವಾಗಿ ಬಂಧಿಸಬೇಕು.ಎಲ್ಲರಿಗೂ ಮರಣದಂಡನೆ ಶಿಕ್ಷೆಯನ್ನು ನೀಡಬೇಕು.  ಇನ್ನೆಂದೂ ದೇಶದಲ್ಲಿ ಇಂತಹ ಕೊಲೆಗಳು ನಡೆಯಬಾರದು. ಇದೇ ಕೊನೆಯ ಕೊಲೆಯಾಗಬೇಕು. ಇನ್ನು ಎಂದಿಗೂ ಇಂತಹ ಕೃತ್ಯ ಮಾಡದ ರೀತಿಯ ಶಿಕ್ಷೆ ನೀಡಬೇಕು. ಎನ್ಐಎ ಈ ಪ್ರಕರಣವನ್ನು ಮುತುವರ್ಜಿಯಿಂದ ತೆಗೆದುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಹಿಂದೆ ಬಿದ್ದು ಕೆಲಸ ಮಾಡಿದ್ದಾರೆ. ಎನ್ಐಎ ಅಧಿಕಾರಿಗಳಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here