



ಮಂಗಳೂರು(ಕಾಸರಗೋಡು): ಸದಸ್ಯರ ಗಮನಕ್ಕೆ ತಾರದೆ ಸುಮಾರು 4.76 ಕೋಟಿ ರೂ ಸಾಲ ತೆಗೆದು ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಪರಾರಿಯಾದ ಘಟನೆ ಕಾರಡ್ಕದಲ್ಲಿ ನಡೆದಿದೆ.



![]()



ಕಾರಡ್ಕ ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಕೆ .ರತೀಶ್ ವಿರುದ್ಧ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೊಸೈಟಿ ಅಧ್ಯಕ್ಷ ಸೂಫಿ ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ರತೀಶ್ ಸಂಸ್ಥೆಗೆ ಬಂದಿಲ್ಲ . ರಜೆ ಅರ್ಜಿ ನೀಡಿಲ್ಲ . ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ . ಇದರಿಂದ ಸಂಶಯಗೊಂಡು ಸಹಾಯಕ ನೋಂದಣಾಧಿಕಾರಿ ರವರಲ್ಲಿ ತಪಾಸಣೆಗೆ ಸೂಚನೆ ನೀಡಿದ್ದು , ತಪಾಸಣೆ ವೇಳೆ ಭಾರೀ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ನಲ್ಲಿ ಹಲವಾರು ಮಂದಿ ಚಿನ್ನಾಭರಣ ವನ್ನು ಅಡವಿಟ್ಟ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ .














