ಸಹನಟಿ,‌ ಮೈಸೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆ-ಪತಿಯಿಂದಲೇ ಕೃತ್ಯ ಆರೋಪ

ಮಂಗಳೂರು(ಮೈಸೂರು): ಭಜರಂಗಿ, ವಜ್ರಕಾಯ ಮತ್ತಿತರ ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಹ ನಟಿ, ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಅವರನ್ನು ಹತ್ಯೆ ಮಾಡಲಾಗಿದೆ.

ವಿದ್ಯಾ ಅವರ ಪತಿ ನಂದೀಶ್ ಈ‌ ಕೊಲೆ ಮಾಡಿದ್ದಾರೆ ಎಂದು‌ ಆರೋಪಿಸಲಾಗಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತುರಗನೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ವಿದ್ಯಾ ಹಾಗೂ ನಂದೀಶನ ನಡುವೆ ಜಗಳ‌ ನಡೆದಿದ್ದು, ಈ ವೇಳೆ‌ ಮಾತಿಗೆ ಮಾತು ಬೆಳೆದು, ನಂದೀಶ ಪತ್ನಿ‌ ವಿದ್ಯಾ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎಂದು ದೂರಲಾಗಿದೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here