ಮಧ್ಯಪ್ರದೇಶದಲ್ಲಿ ಭೀಕರ ನರಮೇಧ-ಮಧ್ಯರಾತ್ರಿ 8 ಮಂದಿ ಸಂಬಂಧಿಕರ ಹತ್ಯೆ-ವಾರದ ಹಿಂದಷ್ಟೇ ಮದುವೆಯಾದ ವ್ಯಕ್ತಿಯಿಂದ ಇದೆಂತಹ ಕೃತ್ಯ

ಮಂಗಳೂರು(ಮಧ್ಯಪ್ರದೇಶ): ಛಿಂದ್​ವಾಡದ ತಮಿಯಾ ಎಂಬಲ್ಲಿನ ಬೋದಲ್ ಕಚಾರ್ ಗ್ರಾಮದಲ್ಲಿ ಬುಡಕಟ್ಟು ಕುಟುಂಬದ ಎಂಟು ಜನರನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಲೆಗೈದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ರಾತ್ರಿ 2.30ರ ವೇಳೆಗೆ ಈ ಭೀಕರ ಹತ್ಯಾಕಾಂಡ ನಡೆದಿದೆ. ತನ್ನ ಕುಟುಂಬದ 8 ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮನೆಮಗ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಂತಕನಿಗೆ 8 ದಿನಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

ಆರೋಪಿ ಸುಖನಿದ್ರೆಯಲ್ಲಿದ್ದ ತನ್ನ ಹೆಂಡತಿ, ತಾಯಿ (55), ಅಣ್ಣ(35), ತಂಗಿ (16), ಅತ್ತಿಗೆ (30) ಮಾತ್ರವಲ್ಲದೇ ಮಕ್ಕಳನ್ನೂ ಕೊಲೆಗೈದಿದ್ದಾನೆ. ಆ ಬಳಿಕ ಚಿಕ್ಕಪ್ಪನ ಮನೆಗೆ ತೆರಳಿ ಚಿಕ್ಕಪ್ಪನ 10 ವರ್ಷದ ಮಗನ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡ ಚಿಕ್ಕಪ್ಪನ ಮಗ ಊರಿನವರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿಗೆ ಮೇ 21ರಂದು ಮದುವೆಯಾಗಿತ್ತು. ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂಬ ಮಾಹಿತಿಯೂ ಇದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮನೀಶ್​ ಖತ್ರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here