ವಿಧಾನ ಪರಿಷತ್ ಗೆ ಅವಿರೋಧ ಆಯ್ಕೆ – ಸದಸ್ಯತ್ವದ ಪ್ರಮಾಣ ಪತ್ರ ಹಸ್ತಾಂತರ

ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು, ಬಿಜೆಪಿಯ 3 ಅಭ್ಯರ್ಥಿಗಳ ಹಾಗೂ ಜೆಡಿಎಸ್ ನ ಒರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ, ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಎಲ್ಲಾ 11 ಮಂದಿ ಉಮೇದ್ವಾರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದ್ದಾರೆ.

ಕಾಂಗ್ರೆಸ್‌ ನಿಂದ ಐವನ್‌ ಡಿಸೋಜ, ಕೆ ಗೋವಿಂದ ರಾಜ್‌, ಜಗದೇವ್‌ ಗುತ್ತೇದಾರ್‌, ಬಲ್ಕೀಸ್‌ ಬಾನು, ಎನ್‌ ಎಸ್‌ ಬೋಸ ರಾಜು, ಡಾ. ಯತೀಂದ್ರ, ಎ ವಸಂತ್‌ ಕುಮಾರ್, ಬಿಜೆಪಿಯಿಂದ ಸಿ ಟಿ ರವಿ, ಎನ್‌ ರವಿ ಕುಮಾರ್‌, ಮುಳೆ ಮಾರುತಿ ರಾವ್‌ ಮತ್ತು ಜೆಡಿಎಸ್‌ ನ ಟಿ ಎನ್‌ ಜವರಾಯಿ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಎಲ್ಲಾ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

LEAVE A REPLY

Please enter your comment!
Please enter your name here