ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಪ್ರವೇಶಿಸಲು ಯತ್ನ- ಮೂವರ ಬಂಧನ

ಮಂಗಳೂರು/ದೆಹಲಿ: ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರನ್ನು ಸಿಐಎಸ್​ಎಫ್​ ಯೋಧರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತರನ್ನು ಖಾಸಿಂ, ಮೋನಿಸ್​, ಸೋಯೆಬ್​ ಎಂದು ಗುರುತಿಸಲಾಗಿದೆ.

ಸೋಯೆಬ್​ ಗುರುತಿನ ಚೀಟಿಯನ್ನು ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ್ದಾನೆ. ಈತ ಉತ್ತರದ ಪ್ರದೇಶದ ಹಾಪುರ್​ ನಿವಾಸಿ ಎಂದು ಗುರುತಿನ ಚೀಟಿಯಲ್ಲಿ ನಮೂದಿಸಿ ಸಂಸತ್​ ಪ್ರವೇಶಿಸಲು ಮುಂದಾಗಿದ್ದಾನೆ. ಸದ್ಯ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತರ ವಿರುದ್ಧ 419, 465,468, 120ಬಿ ಸೆಕ್ಷನ್​ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ. ಮೂವರ ನಕಲಿ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಮೈಸೂರು ಮಾಜಿ ಸಂಸದರಾದ ಪ್ರತಾಪ್​ ಸಿಂಹ ಅವರಿಂದ ಅನುಮತಿ ಪಡೆದ ಆರು ವಿದ್ಯಾರ್ಥಿಗಳು ಸಂಸತ್ ಪ್ರವೇಶಿಸಿದ್ದರು. 

LEAVE A REPLY

Please enter your comment!
Please enter your name here