ʼಸತ್ಸಂಗʼ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ- 87 ಮಂದಿ ಸಾವು

ಮಂಗಳೂರು(ಲಕ್ನೋ): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಇಂದು (ಜು.2) ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, 23 ಮಹಿಳೆಯರು,ಮೂವರು ಮಕ್ಕಳು ಮತ್ತು ಓರ್ವ ಪುರುಷ  ಸೇರಿದಂತೆ ಕನಿಷ್ಠ 27 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಹತ್ರಾಸ್‌ ಜಿಲ್ಲೆಯ ಸಿಕಂದ್ರ ರಾವ್‌ ಪ್ರದೇಶದ ರಾತೀ ಭನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ ನಲ್ಲಿ ಧಾರ್ಮಿಕ ಭೋದಕರೊಬ್ಬರು ನಡೆಸುತ್ತಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಜನ ಸೇರಿದ್ದು ವಿಪರೀತ ಸೆಕೆಯ ಹಿನ್ನಲೆಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಅಸ್ವಸ್ಥತೆಗೆ ಇದು ಕಾರಣವಾಗಿದ್ದು ಸೇರಿದ್ದ ಜನರು ಒಮ್ಮೆಲೆ ಹೊರಗೆ ಬರಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಕಾರ್ಯಕ್ರಮ ಮುಗಿದು ಎಲ್ಲರೂ ಹೊರಗೆ ಹೋಗುವ  ಅವಸರದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಸಂತ್ರಸ್ತೆಯೊಬ್ಬರು ಹೇಳಿದ್ದಾರೆ.  ಫಟನೆಗೆ ನಿಖರ ಕಾರಣ ಎನು ಎಂಬುವುದನ್ನು ತನಿಖೆ ನಡೆಸಲಾಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://x.com/RakeshManer1990/status/1808101779113984223

https://x.com/i/status/1808111201013915941

LEAVE A REPLY

Please enter your comment!
Please enter your name here