ಸಂಸತ್‌ ನಲ್ಲಿ ರಾಹುಲ್‌ ಗಾಂಧಿ ಹೇಳಿಕೆ ಖಂಡಿಸಿದ ದ.ಕ ಬಿಜೆಪಿ

ಮಂಗಳೂರು: ಹಿಂದೂಗಳೆಂದುಕೊಳ್ಳುವವರು ಈ ದೇಶದಲ್ಲಿ ಹಿಂಸೆ, ಸುಳ್ಳು, ದ್ವೇಷ ಉತ್ಪಾದಿಸುವವರು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್‌ನಲ್ಲಿ ಹೇಳಿರುವ ಮಾತು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದ.ಕ. ಬಿಜೆಪಿ ಪ್ರಮುಖರು ರಾಹುಲ್ ಗಾಂಧಿ ಮಾತಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಈ ಮಾತನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಯಾವುದೇ ಸಮುದಾಯವನ್ನು ಹಿಂಸೆ ದ್ವೇಷದೊಂದಿಗೆ ಸಮೀಕರಿಸೋದು ಖಂಡಿತವಾಗಿಯೂ ಸರಿಯಲ್ಲ. ಹಿಂದೂಗಳು ಎಲ್ಲರನ್ನು ನಿರ್ಮಲ ಜ್ಞಾನ ಜ್ಯೋತಿಯ, ಶಾಂತಿ ಸಹಬಾಳ್ವೆಯಿಂದ ಕಂಡವರು, ಯಾರನ್ನೋ ಓಲೈಸೋದಕ್ಕಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಈ ರೀತಿಯ ಮಾತು ಸರಿಯಲ್ಲ. ಹಿಂದೂಗಳನ್ನ ಈ ರೀತಿ ಬಿಂಬಿಸಿರುವುದು ಅವರ ಅಪಕ್ವ ಮಾನಸಿಕತೆಯನ್ನ ತೋರಿಸುತ್ತದೆ. ರಾಹುಲ್ ಗಾಂಧಿಯವರು ಈ ದೇಶದ ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು ಎಂದು  ಬಿಜೆಪಿ ವಕ್ತಾರ ಸತೀಶ್ ಪ್ರಭು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here