ನಟೋರಿಯಸ್ ರೌಡಿ ಶೀಟರ್ ಕಡಪ್ಪರ‌ ಸಮೀರ್ ಹಂತಕರ ಬಂಧನ

ಮಂಗಳೂರು: ನಟೋರಿಯಸ್ ರೌಡಿ ಶೀಟರ್ ಕಡಪ್ಪಾರ‌ ಸಮೀರ್ ಕೊಲೆ ಪ್ರಕರಣವನ್ನು ಉಳ್ಳಾಲ ಪೊಲೀಸರು ಬೇಧಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಉಳ್ಳಾಲದ ಕಿನ್ಯಾ ನಿವಾಸಿ ನಿಯಾಸ್, ಸುರತ್ಕಲ್ ನ ಮಹಮ್ಮದ್ ನೌಷಾದ್, ಬಜಾಲ್ ನ ತನ್ವೀರ್ ಮತ್ತು ಉಡುಪಿ ಕಾಪುವಿನ ಮಹಮ್ಮದ್ ಇಕ್ಬಾಲ್ ಬಂಧಿತರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಳ್ಳಾಲದಲ್ಲಿ 6 ವರ್ಷಗಳ ಹಿಂದೆ ನಡೆದ ನಟೋರಿಯಸ್‌ ಕ್ರಿಮಿನಲ್‌ ಟಾರ್ಗೆಟ್‌ ಗ್ರೂಪಿನ ಇಲ್ಯಾಸ್ ಹತ್ಯೆಗೆ ಪ್ರತಿಕಾರವಾಗಿ ಸಮೀರ್ ಕೊಲೆ ನಡೆದಿದೆ. 2018ರಲ್ಲಿ ನಡೆದ ಇಲ್ಯಾಸ್‌ ಕೊಲೆ ಪ್ರಕರಣದ ವಿಚಾರಣೆ 2023ರಲ್ಲಿ ಅಂತ್ಯಗೊಂಡಿದ್ದು, ಅದರಲ್ಲಿ ಸಮೀರ್‌ ಖುಲಾಸೆಗೊಂಡಿದ್ದ. ಅದಾದ ಬಳಿಕ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಆತನ ಮೇಲೆ ಸಹ ಕೈದಿಗಳು ದಾಳಿ‌ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಇದಾದ ಬಳಿಕ ದುಷ್ಕರ್ಮಿಗಳ ತಂಡ ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿ ಪರಾರಿಯಾಗಿತ್ತು.

LEAVE A REPLY

Please enter your comment!
Please enter your name here