ಮತದಾನ ಜಾಗೃತಿ- 6 ಐಕಾನ್‌ ಗಳ ಆಯ್ಕೆ ಮಾಡಿದ ಸ್ವೀಪ್ ಸಮಿತಿ

ಮಂಗಳೂರು: ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿಯೂ ಮತದಾನ ಮಾಡುವೆ ಎಂಬ ಆಶಯ ವಾಕ್ಯದೊಂದಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಯುವ ಸಮೂಹದ ಸಹಿತ ಮತದಾರರಲ್ಲಿ ಮತದಾನದ ಮಹತ್ವ ಸಾರುವ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವ

ಮತದಾರರನ್ನು ಸೆಳೆಯುವ ಸಲುವಾಗಿ ದ.ಕ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಪ್ರಮುಖ 6 ಮಂದಿ ಐಕೊನ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಒಂದು ಮೊಟ್ಟೆ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಪದ್ಮಶ್ರೀ ಹರೇಕಳ ಹಾಜಬ್ಬ, ಭಾಗವತ ಸತೀಶ್ ಪಟ್ಲ, ವಿಕಲ ಚೇತನ ಸಬಿತ ಮೋನಿಸ್, ನಿರೂಪಕಿ ಅನುಶ್ರೀ, ಮತ್ತು ನಟಿ ಸಂಗೀತ ಶೃಂಗೇರಿ ಅವರನ್ನು ಮತದಾನ ಜಾಗೃತಿಯ ಐಕೊನ್ ಗಳಾಗಿ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here