ಮಂಗಳೂರು-ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌-ಒಡಿಶಾದಲ್ಲಿ ಸಿಮ್‌ ಪೂರೈಕೆದಾರನ ಬಂಧನ

ಮಂಗಳೂರು: 2022 ನವಂಬರ್‌ 19 ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಆರೋಪಿ ಮಹಮ್ಮದ್‌ ಶಾರಿಕ್‌ ಗೆ ಮೊಬೈಲ್ ಸಿಮ್‌ ಪೂರೈಕೆ ಮಾಡಿದ ಆರೋಪಿಯನ್ನು ಒಡಿಶಾದ ವಿಶೇಷ ಕಾರ್ಯಪಡೆ ಬಂಧಿಸಿ ವಶಕ್ಕೆ ಪಡೆದಿದೆ.

ಬಂಧಿತ ಆರೋಪಿ ಜಾಜ್‌ ಪುರ ಜಿಲ್ಲೆಯವನಾಗಿದ್ದು ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಮಹಮ್ಮದ್‌ ಶಾರಿಕ್‌ ಜತೆ ಸಂಪರ್ಕವಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಒಡಿಶಾ ಪೊಲೀಸರು ಕರ್ನಾಟಕ ಪೊಲೀಸ್‌ ಮತ್ತು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ನೀಡಿದ್ದು ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here