ಲಕ್ಷ್ಮೀದೇವತೆಯ ಅವಹೇಳನೆ – ಖ್ಯಾತ ನಿರ್ಮಾಪಕಿ ಕ್ಷಮೆ ಕೇಳುವಂತೆ ಪಟ್ಟು

ಮಂಗಳೂರು: ನಿರ್ಮಾಪಕಿ ಏಕ್ತಾ ಕಪೂರ್ ಓಟಿಟಿ ಪ್ರಸಾರಕ್ಕಾಗಿ ನಿರ್ಮಿಸುತ್ತಿರುವ ವೆಬ್ ಸರಣಿಯ ಪೋಸ್ಟರ್ ನಲ್ಲಿ ಹಿಂದೂ ದೇವತೆಯನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದೆ.

ಎಕ್ತಾ ಕಪೂರ್ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲ್ಮ್ಸ್ ʼಗಂಧಿ ಬಾತ್ʼ ವೆಬ್ ಸರಣಿಯನ್ನು ಆರಂಭಿಸಿದೆ. ಆರನೇ ಸರಣಿ ಸಿದ್ಧವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್ವೊಂದನ್ನು ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಲಕ್ಷ್ಮೀದೇವತೆಯನ್ನು ಹೋಲುವ ಮಹಿಳೆಯ ಚಿತ್ರವಿದೆ. ಆ ಚಿತ್ರದ ಮೂಲಕ ಲಕ್ಷ್ಮೀದೇವತೆಯನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನೆಟ್ಟಿಗರು ಏಕ್ತಾ ಕಪೂರ್ ವಿರುದ್ಧ ಕಿಡಿಕಾರಿದ್ದು ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here