ವಿಮಾನ ನಿಲ್ದಾಣದಲ್ಲಿ ಪಾರ್ಕ್‌ ಮಾಡಿದ್ದ ವಾಹನಗಳ ಮೇಲೆ ಬಿದ್ದ ಮರ-ಅದಾನಿ ಸಂಸ್ಥೆ ನಿಲುವಿಗೆ ಆಕ್ರೋಶಗೊಂಡ ಪ್ರಯಾಣಿಕರು

ಮಂಗಳೂರು: ಅದಾನಿ ಒಡೆತನದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಪಾರ್ಕಿಂಗ್ ಮಾಡಿದ್ದ ವಾಹನಗಳ ಮೇಲೆ ಗಾರ್ಡನ್ ನ ಮರವೊಂದು  ಬಿದ್ದು ಹಲವು ವಾಹನಗಳು ಜಖಂಗೊಂಡಿದೆ.

ಪ್ರಯಾಣಿಕರು ಪಾರ್ಕಿಂಗ್ ಮಾಡಿ ಹೋದ 15ಕ್ಕೂ ಹೆಚ್ಚು ವಾಹನಗಳು ಮರ ಬಿದ್ದು ಜಖಂಗೊಂಡಿದ್ದು ಪ್ರಯಾಣಿಕರು ಮತ್ತು ಅದಾನಿ ಸಂಸ್ಥೆಯ ನಡುವೆ ವಾಗ್ವಾದ ನಡೆದಿದೆ. ಘಟನೆಯಿಂದ ಹಾನಿಯಾದ ವಾಹನಗಳ ಜವಾಬ್ದಾರಿ ನಮ್ಮದಲ್ಲ ಎಂದು ಅದಾನಿ ಸಂಸ್ಥೆ ಹೇಳಿರುವುದೇ ಇದಕ್ಕೆ ಕಾರಣ. ವಾಹನ ಮಾಲೀಕರು ಹಾನಿಗೊಳಗಾದ ವಾಹನಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದು, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here