ಉತ್ತರ ಭಾರತದಲ್ಲಿ ಪ್ರವಾಹ – 41 ಮಂದಿ ಮೃತ್ಯು

ಮಂಗಳೂರು( ಉ.ಪ್ರ): ಮುಂಗಾರು ಮಾರುತ ಹಾಗೂ ಪಶ್ಚಿಮ ಪ್ರಕ್ಷುಬ್ದತೆಯ ಕಾರಣದಿಂದ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದೆ. ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಭಾರಿ ಸಂಖ್ಯೆಯ ಸಾವು ನೋವು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹಲವೆಡೆ ವ್ಯಾಪಕ ಭೂಕುಸಿತ, ಪರ್ವತ ಪ್ರದೇಶ ಹಾಗೂ ಬಯಲು ಪ್ರದೇಶಗಳಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿದ್ದಾರೆ. ಬಿಯಾಸ್, ಸಟ್ಲೇಜ್ ಮತ್ತು ಇತರ ನದಿಗಳ ಪ್ರವಾಹದ ನೀರಿನಲ್ಲಿ ಮನೆಗಳು ಹಾಗೂ ನಿಲ್ಲಿಸಿದ್ದ ಕಾರುಗಳು ತೇಲಿ ಹೋಗುತ್ತಿದ್ದು, ಗ್ರಾಮಗಳು, ನಗರಗಳು ಹಾಗೂ ಕೃಷಿ ಭೂಮಿ ಜಲಾವೃತವಾಗಿವೆ.
ವಿವಿಧೆಡೆ ಮಳೆ ಸಂಬಂಧಿ ಅನಾಹುತಗಳಿಗೆ 41 ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here