ಧಾರಾಕಾರ ಮಳೆಗೆ ಧರಾಶಾಹಿಯಾದ ಬೃಹತ್ ಮರ

ಮಂಗಳೂರು: ಜು.22 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಬೃಹದಾಕಾರದ ಮರವೊಂದು ಬುಡ ಸಮೇತ ನೆಲಕ್ಕುರುಳಿದ ಘಟನೆ ಲೇಡಿಹಿಲ್ ಸರ್ಕಲ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಘಟನೆಯ ವೇಳೆ ಸ್ಕೂಟರ್ ಸವಾರರಿಬ್ಬರು ಆ ದಾರಿಯಾಗಿ ಹಾದು ಬರುತ್ತಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಾಹನಗಳ ಓಡಾಟಕ್ಕೆ ತೊಡಕುಂಟಾಗಿದ್ದು, ಏಕಮುಖ ಸಂಚಾರ ರಸ್ತೆ ಬಂದ್ ಆಗಿದೆ ಎಂದು ತಿಳಿದು ಬಂದಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here