ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿಧಿವಶ

ಮಂಗಳೂರು: ಮಂಗಳೂರು ಮಹಾ ನಗರದ ನ್ಯೂ ಚಿತ್ರ ಟಾಕೀಸ್ ಬಳಿ ಬರುವ ಬಸವನಗುಡಿ ಮಠದ ಶ್ರೀಗಳಾದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಅವಿಭಜಿತ ಜಿಲ್ಲೆ ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಎಂಬಲ್ಲೂ ಸಹ ಮಠ ಹೊಂದಿದ್ದು, ಅಪಾರ ಭಕ್ತ ವೃಂದವನ್ನು ಹೊಂದಿದ್ದಾರೆ. ಅಂದ ಹಾಗೆ ಈ ಮಠವು ಉಜ್ಜಯಿನಿಯ ಶಾಖಾ ಮಠವಾಗಿದೆ. ಶ್ರೀಗಳ ಅಂತ್ಯಕ್ರಿಯೆ ನಾಳೆ(ಜು.25) ಮಧ್ಯಾಹ್ನ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಮಠದ ಆವರಣದಲ್ಲಿ ಗಣ್ಯರ-ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here