ಮೋತಿಮಹಲ್‌ ಈಜುಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯ ಮೃತದೇಹ ಪತ್ತೆ

ಮಂಗಳೂರು: ಮಂಗಳೂರಿನ ಖ್ಯಾತ ವಸತಿಗೃಹ ಮೋತಿಮಹಲ್‌ ನ ಈಜುಕೊಳದಲ್ಲಿ ಮುಳುಗಿ ಬ್ಯಾಂಕ್‌ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಕೇರಳದ ತಿರುವನಂತಪುರ ನಿವಾಸಿ ಗೋಪು ಆರ್‌ ನಾಯರ್‌ ಎಂದು ಗುರುತಿಸಲಾಗಿದೆ. ಯುನಿಯನ್‌ ಬ್ಯಾಂಕ್‌ ಅಧಿಕಾರಿಯಾಗಿದ್ದ ಗೋಪು ಆರ್‌ ನಾಯರ್‌ ಸೆ.10ರಂದು ಮಂಗಳೂರಿಗೆ ಆಗಮಿಸಿ ಮೋತಿ ಮಹಲ್‌ ನಲ್ಲಿ ಉಳಿದುಕೊಂಡಿದ್ದರು. ನಿನ್ನೆ ಸಂಜೆ ವೇಳೆಗೆ ಹೋಟೆಲ್‌ ರೂಮಿನಿಂದ ಹೊರಹೋಗಿದ್ದರು. ಇಂದು ಹೋಟೆಲ್‌ ನ ಈಜು ಕೊಳದಲ್ಲಿ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here