ಭಾರೀ ಮಳೆಗೆ ಕುಸಿದ ಬಾವಿ – ಅಪಾಯದಿಂದ ಪಾರಾದ ಮನೆಮಂದಿ

ಮಂಗಳೂರು/ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ಮುಂಭಾಗದ ಬಾವಿಯೊಂದು ಭೂಕುಸಿತಕ್ಕೆ ಒಳಗಾಗಿ ಧಾರಾಶಾಹಿಯಾದ ಘಟನೆ ನಡೆದಿದೆ.

ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪದ ಸ್ಥಳೀಯ ನಿವಾಸಿ ವಸಂತಿ ಶೆಟ್ಟಿ ಎಂಬುವರಿಗೆ ಸೇರಿದ ಮನೆ ಮುಂದೆ ಮೂರು ವರ್ಷಗಳ ಹಿಂದೆ ಬಾವಿ ನಿರ್ಮಿಸಿದ್ದರು. ಮನೆಯ ಮುಂದೆ ನಿರ್ಮಿಸಿದ್ದ ಅಂದಾಜು 58 ಅಡಿ ಆಳವಿರುವ ಈ ಬಾವಿ ಮನೆಯ ಸೌಂದರ್ಯವನ್ನು ಹೆಚ್ಚಿಸಿತ್ತು. ನಿನ್ನೆ ಸುರಿದ ಧಾರಾಕಾರ ಮಳೆಗೆ ಭೂಕುಸಿತಕ್ಕೊಳಗಾಗಿ ಬಾವಿ ಕುಸಿದಿದೆ. ಬಾವಿ ಕುಸಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್‌ ಪಕ್ಕದಲ್ಲೇ ಇರುವ ಮನೆ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

LEAVE A REPLY

Please enter your comment!
Please enter your name here